29 May 2012

ಪ್ರೀತಿಯನ್ನು ಅರಿತ ಸಮಯ

MªÉÄä ¨sÁªÀ£ÉUÀ¼É¯Áè MmÁÖV vÀªÀÄä ¨É¹UÉ gÀeÉ PÀ¼ÉAiÀÄ®Ä MAzÀÄ ¢éÃ¥ÀPÉÌ ºÉÆÃzÀgÀÄ. C°è CªÀgÀªÀgÀ ¸Àé¨sÁªÀPÉÌ C£ÀÄUÀÄtªÁV ¸ÀAvÉÆÃµÀ¢A¢zÀÝgÀÄ. EzÀÝQÌzÀÝAvÉ D ¢éÃ¥ÀPÉÌ ¸À«Äæ¸ÀÄwÛgÀĪÀ ©gÀÄUÁ½AiÀÄ JZÀÑjPÉAiÀÄ WÀAmÉ PÉý¹vÀÄ. DUÀ J®èjUÀÆ D ¢éÃ¥À¢AzÀ ºÉÆgÀ£ÀqÉAiÀÄ®Ä ¸ÀÆZÀ£É PÉÆqÀ¯Á¬ÄvÀÄ. F ¸ÀÄ¢Þ PÉý CªÀgÉ®èjUÀÆ UÁ§jAiÀiÁ¬ÄvÀÄ. J®ègÀÆ vÀªÀÄä zÉÆÃtÂUÀ¼ÀvÀÛ NrzÀgÀÄ. ¸Àé®àªÀÄnÖUÉ ºÁ¼ÁVzÀÝ zÉÆÃtÂUÀ¼À£ÀÄß j¥ÉÃj ªÀiÁr PÉ®¸ÀPÉÌ ¤AiÉÆÃf¸À¯Á¬ÄvÀÄ. DzÀgÉ KPÉÆÃ ¦æÃw ªÀiÁvÀæ C°èAzÀ vÀPÀët ºÉÆgÀqÀ®Ä ªÀÄ£À¸ÀÄì ªÀiÁqÀ°®è. C¯Éèà EzÀÄÝ ªÀiÁqÀĪÀAvÀºÀ PÉ®¸À §ºÀ¼À¶ÖzÀݪÀÅ. DzÀgÉ ªÉÆÃqÀ PÀªÉAiÀÄÄwÛzÀÝAvÉ, ¦æÃwAiÀÄÆ C°èAzÀ ºÉÆgÀqÀĪÀ wêÀiÁð£À ªÀiÁrvÀÄ. zÀÄzÉðʪÀªÉAzÀgÉ D ¸ÀªÀÄAiÀÄPÉÌ C°è AiÀiÁªÀ zÉÆÃtÂAiÀÄÄ G½¢gÀ°®è. DUÀ ¦æÃwAiÀÄÄ vÀ£Àß ¸ÀºÁAiÀÄPÉÌ AiÀiÁgÁzÀgÀÄ §gÀĪÀgÉA§ £ÀA©PɬÄAzÀ JqÀ, §®UÀ¼À°è £ÉÆÃqÀÄwÛvÀÄÛ. D ¸ÀªÀÄAiÀÄzÀ°è ¸ÀªÀÄÈ¢ÞAiÀÄÄ MAzÀÄ LµÁgÁ«Ä zÉÆÃtÂAiÀÄ°è ºÉÆÃUÀÄwÛgÀĪÀÅzÀÄ PÀArvÀÄ. ¦æÃwAiÀÄÄ vÀ£ÀߣÀÄß PÀgÉzÉÆAiÀÄå®Ä ¸ÁzsÀåªÉà JAzÀÄ ¸ÀªÀÄÈ¢ÞAiÀÄ£ÀÄß PÀÆV PÉývÀÄ. CzÀPÉÌ ¸ÀªÀÄÈ¢ÞAiÀÄÄ DUÀzÀÄ, £À£Àß zÉÆÃtÂAiÀÄÄ ¨É¯É ¨Á¼ÀĪÀ a£ÀßzÀ ªÀÄvÀÄÛ ¨É½îAiÀÄ D¨sÀgÀtUÀ½AzÀ vÀÄA©zÉ, CzÀgÀ £ÀqÀÄªÉ ¤£ÀUÉ eÁUÀ«®è JAzÀÄ ºÉý ºÉÆgÀlÄºÉÆÃ¬ÄvÀÄ.
¸Àé®à ¸ÀªÀÄAiÀÄzÀ £ÀAvÀgÀ, CºÀAPÁgÀ ºÉÆÃUÀÄwÛgÀĪÀÅzÀ£ÀÄß PÀAqÀÄ ªÀÄvÉÛ ¦æÃwAiÀÄÄ PÀÆVvÀÄ. £Á£ÉƧâ£É F ¢éÃ¥ÀzÀ°è G½¢gÀĪÉ, £À£ÀߣÀÄß zÀAiÀÄ«lÄÖ ¤£Àß zÉÆÃtÂAiÀİè PÀgÉzÀÄPÉÆAqÀÄ ºÉÆÃUÀÄwÛÃAiÀÄ JAzÀÄ ¨ÉÃrvÀÄ. DzÀPÉÌ CºÀAPÁgÀªÀÅ ¸ÉÆQ̤AzÀ ¸ÁzsÀå«®è JAzÀÄ ºÉývÀÄ. ¤£Àß ªÀÄtÄÚ PÁ°¤AzÀ £À£Àß zÉÆÃtÂAiÉįÁè ªÀÄuÁÚUÀÄvÀÛzÉ JAzÀÄ ºÉý ºÉÆgÀlÄºÉÆÃ¬ÄvÀÄ. EzÁzÀ §½PÀ, zÀÄ:RªÀÅ PÁt¹vÀÄ. ¦æÃwAiÀÄÄ PÀÆV D zÀÄ:RªÀ£ÀÄß PÉýzÁUÀ, CzÀÆ DUÀzÀÄ JAzÀÄ ºÉývÀÄ. ªÉÆzÀ¯Éà £Á£ÀÄ £À£Àß zÀÄ:RzÀ°è ¨ÉÃAiÀÄÄwÛzÉÝãÉ. £Á£ÀÄ MAnAiÀiÁVgÀ®Ä §AiÀĸÀÄvÉÛÃ£É JAzÀÄ ºÉý ºÉÆgÀlÄºÉÆÃ¬ÄvÀÄ. PÉ® ¤«ÄµÀzÀ §½PÀ, ¸ÀAvÉÆÃµÀªÀÅ CvÀÛ §AzÀzÀÝ£ÀÄß PÀAqÀ ¦æÃwAiÀÄÄ ªÀÄvÉÛ ¸ÀºÁAiÀÄPÁÌV ¨ÉÃrvÀÄ. ¸ÀAvÉÆÃµÀªÀÅ JµÀÄÖ ¸ÀAvÉÆÃµÀªÁVvÉÛAzÀgÉ CzÀÄ ¨ÉÃgÉ PÀÆVUÉ Q«UÉÆqÀ¯ÉìĮè. EvÀÛ ¦æÃwAiÀÄÄ ¤gÀÄvÁìºÀ¢AzÀ PÀÄUÀÄÎwÛvÀÄÛ. D ¸ÀªÀÄAiÀÄzÀ°è, ¦æÃw£À£ÉÆßA¢UÉ ¨Á, £Á£ÀÄ ¤£ÀߣÀÄß PÀgÉzÉÆAiÀÄÄåvÉÛÃ£É JAzÀÄ AiÀiÁgÉÆÃ PÀgÉzÀzÀÄÝ PÉý¹vÀÄ. D jÃw PÀgÉzÀzÀÄÝ AiÀiÁgÉA§ Cj«®èzÉà ¦æÃwAiÀÄÄ zÉÆÃtÂAiÀÄ£ÀÄß Kj vÁ£ÀÄ FUÀ ¸ÀÄgÀQëvÀ ¸ÀܼÀPÉÌ ºÉÆÃV ¸ÉÃgÀ§ºÀÄzÉAzÀÄ £ÉªÀÄä¢AiÀÄ ¤lÄÖ¹gÀÄ ©nÖvÀÄ. CvÀÛ ¦æÃwAiÀÄÄ zÀqÀªÀ£ÀÄß ¸ÉÃj zÉÆÃt¬ÄAzÀ E½AiÀÄÄvÀÛ¯Éà eÁÕ£ÀªÀ£ÀÄß PÀAqÀÄ PÉývÀÄ, vÀªÀÄä zÉÆÃtÂAiÀįÉèà ºÀwÛ¸À®Ä ¤gÁPÀj¹zÀ d£ÀgÀ £ÀqÀĪÉ, £À£ÀߣÀÄß E°èUÉ PÀgÉvÀAzÀªÀgÀÄ AiÀiÁgÉAzÀÄ ¤£ÀUÉ UÉÆvÉÛÃ?” ‘eÁÕ£ÀªÀÅ ªÀÄAzÀºÁ¸À ©Ãj CzÀÄ ¸ÀªÀÄAiÀÄ JA¢vÀÄ. ¸ÀªÀÄAiÀĪÀÅ £À£ÀUÁV ¤AvÀÄ £À£ÀߣÀÄß PÀgÉvÀAzÀÄ PÁ¥ÁqÀ®Ä PÁgÀtªÉãÉAzÀÄ ¦æÃw AiÉÆÃa¸ÀvÉÆqÀVvÀÄ.
eÁÕ£ÀªÀÅ D¼ÀªÁzÀ «ªÉÃPÀ¢AzÀ ªÀÄÄUÀļÀßPÀÄÌ ¤£Àß ¤dªÁzÀ »jªÉÄ ªÀÄvÀÄÛ ¸ÁªÀÄxÀðå ¸ÀªÀÄAiÀÄPÉÌ ªÀiÁvÀæ w½¢gÀĪÀÅzÀÄ. PÉêÀ® ¦æÃw¬ÄAzÀ ªÀiÁvÀæ ¥Àæ¥ÀAZÀzÀ°è ±ÁAw ªÀÄvÀÄÛ ¸ÀAvÉÆÃµÀ vÀgÀ®Ä ¸ÁzsÀåAiÉÄAzÀÄ ºÉývÀÄ. EzÀgÀ ªÀÄÄRå ¸ÀAzÉñÀªÉAzÀgÉ, £ÁªÀÅ ¸ÀªÀÄÈ¢Þ¬ÄA¢zÁÝUÀ, ¦æÃwAiÀÄ£ÀÄß UÀÄgÀÄw¸ÀzÉà ºÉÆÃUÀÄvÉÛêÉ. £ÀªÀÄUÉ AiÀiÁªÁUÀ ¦æÃw ªÀÄÄRåªÉÇà DUÀ CzÀ£ÀÄß ªÀÄgÉwgÀÄvÉÛêÉ. ¸ÀAvÉÆÃµÀ ªÀÄvÀÄÛ zÀÄ:RzÀ ¸ÀªÀÄAiÀÄzÀ®Æè ¦æÃwAiÀÄ£ÀÄß PÀqÉUÀt¸ÀÄvÉÛêÉ. DzÀgÉ PÁ®ªÀÅ £ÀªÀÄUÉ ¸ÀªÀÄAiÀÄzÀ ªÀÄÆ®PÀ ¦æÃwAiÀÄ ¨É¯ÉAiÀÄ£ÀÄß w½¸ÀÄvÀÛzÉ. £ÁªÀÅ J®ègÀ£ÀÆß ¦æÃw¹, ¦æÃwAiÀÄ£ÀÄß £ÀªÀÄä ¢£À¤vÀåzÀ ¨sÁUÀªÀ£ÁßV¹PÉÆ¼ÉÆîÃt.

15 April 2012

ಸ್ನೇಹಲೋಕ

ಸುಮ್ಮನೆ ಅಲ್ಲಿ ಸ್ನೇಹದ ಅಲೆ
ಸಿಂಚನ ಇಲ್ಲಿ ರಾಗದಾ ಮಳೆ

ಮಾತಿರಲಿ, ಮುನಿಸಿರಲಿ 
ನನ್ನೊಳಗೆ ನೀನಿರುವೆ
ನನ್ನ ಪ್ರೀತಿ ಹೃದಯ ನೀ ತುಂಬಿದೆ
ನಿನ್ನ ಮುದ್ದಾದ ಮಾತಿನಲ್ಲೂ
ನೀನು ಬರಲೆಂದೇ ಕಾಯುವೆನು

ಮನಸಿನ ಮಾತು ಕಣ್ಣಲ್ಲಿ
ಹೃದಯದ ಮಾತು ಹಾಡಲ್ಲಿ
ನನ್ನ ಪುಟ್ಟ ಕನಸು ನೀ ತುಂಬಿದೆ
ನಿನ್ನ ಇಂಪಾದ ರಾಗದಲ್ಲೂ
ನಿನ್ನ ನೆನಪಲ್ಲೇ ಕಾದಿಹೆನು

ಸುಮ್ಮನೆ ಅಲ್ಲಿ ಸ್ನೇಹದ ಅಲೆ
ಸಿಂಚನ ಇಲ್ಲಿ ರಾಗದಾ ಮಳೆ

ಇರುಳ ಚಂದಿರನ ಹಾಗೆ
ಅರಳೋ ಹೂವಿನ ಹಾಗೆ
ನನ್ನ ಬಾಳ ದೀಪ ನೀನಾದೆಯಾ
ನಿನ್ನ ಕಾಲ್ಗೆಜ್ಜೆ ಸದ್ದಿನಲ್ಲೂ
ನಾದ ಸ್ವರವನ್ನೇ ಕೇಳುವೆನು

ಸುಮ್ಮನೆ ಅಲ್ಲಿ ಸ್ನೇಹದ ಅಲೆ
ಸಿಂಚನ ಇಲ್ಲಿ ರಾಗದಾ ಮಳೆ

ಸುಮ್ಮನೆ ಅಲ್ಲಿ ಸ್ನೇಹದ ಅಲೆ
ಸಿಂಚನ ಇಲ್ಲಿ ರಾಗದಾ ಮಳೆ

ಮಾತಿರಲಿ, ಮುನಿಸಿರಲಿ 
ನನ್ನೊಳಗೆ ನೀನಿರುವೆ
ನನ್ನ ಪ್ರೀತಿ ಹೃದಯ ನೀ ತುಂಬಿದೆ
 
 

 

08 March 2012

ಬಣ್ಣದ ಚಿಟ್ಟೆ

ಬಣ್ಣದ ಚಿಟ್ಟೆ ಬಣ್ಣದ ಚಿಟ್ಟೆ
ಬೇಲಿಯ ಹಾರುತ್ತಿತ್ತು
ಬಟ್ಟೆಯ ತೊಟ್ಟು ಬಾಗಿನ ಹೊತ್ತು
ಬಾನಿಗೆ ಏರುತ್ತಿತ್ತು

ಮಧುವನು ಹೀರಿ ಮೆಲ್ಲನೆ ಹಾಡಿ
ಮೋಡಕ್ಕೆ ಹೇಳುತ್ತಿತ್ತು
ನೀರನು ಹೀರಿ ಜೇನನು ಚೆಲ್ಲಿ
ಸಿಹಿಯ ಹಂಚಿತ್ತು

ಹಸಿರನು ಹಾಸಿ ಹೂಮಳೆ ಚೆಲ್ಲಿ
ಹರುಷವ ತಂದಿತ್ತು
ಎಲ್ಲಡೆ ಸುಗ್ಗಿ ಏಕತೆ ತನ್ನಿ
ಎನ್ನುತ ಕರೆದಿತ್ತು

ಭೇದವ ಬಿಟ್ಟು ಭಾವನೆ ತಂದು
ಭೂಮಿಯ ಸುತ್ತಿತ್ತು
ಸುಖವನು ನೀಡಿ ಶಾಂತಿಯ ಕೋರಿ
ಸ್ವರ್ಗವ ತೆರೆದಿತ್ತು 

01 January 2012

2030: ಶಿಕ್ಷಣ ಭವಿಷ್ಯದ ಒಂದು ಪಕ್ಷಿ ನೋಟ


ಇತ್ತೀಚಿಗೆ, ಬೆಂಗಳೂರಿನ ಆನೇಕಲ್ ತಾಲೂಕಿನಲ್ಲಿರುವ ಒಂದು ಶಾಲೆಗೆ ಅತಿಥಿ ಶಿಕ್ಷಕನಾಗಿ ಹೋಗಿದ್ದೆ. ಅಲ್ಲಿ ಹತ್ತನೇ ತರಗತಿ ವಿದ್ಯಾರ್ಥಿಗಳನ್ನು ಪರಿಚಯ ಮಾಡಿಕೊಳ್ಳುತ್ತಿದ್ದಾಗ ಅವರ ಹೆಸರು ಮತ್ತು ಮುಂದಿನ ಗುರಿ ಏನು ಎಂದು ಕೇಳಿದೆ. ವಿದ್ಯಾರ್ಥಿಗಳು ಒಬ್ಬಬ್ಬರಾಗಿ ಎದ್ದುನಿಂತು ತಮ್ಮ ಪರಿಚಯ ಮಾಡಿಕೊಂಡರು.  ಎಲ್ಲೆಡೆ ಇರುವ ಹಾಗೆ ಹೆಚ್ಚಿನ ವಿದ್ಯಾರ್ಥಿಗಳು ತಮ್ಮ ಗುರಿ ಇಂಜಿನಿಯರ್, ಡಾಕ್ಟರ ಆಗಬೇಕೆಂದು ಹೇಳಿದರು. ಆದರೆ, ಅವರಲ್ಲಿ ಒಬ್ಬ ವಿದ್ಯಾರ್ಥಿ ಕೊಟ್ಟ ಉತ್ತರ ನನ್ನನ್ನು ನಿಬ್ಬೆರಗುಗೊಳಿಸಿತು. ಆ ವಿದ್ಯಾರ್ಥಿ 2030ರ ವೇಳೆಗೆ ಭಾರತದಲ್ಲಿ, ಅಮೇರಿಕಾದ ಹಾರ್ವರ್ಡ್, ಸ್ಟಾನ್ಫೋರ್ಡ್, ಎಂಐಟಿ ವಿಶ್ವವಿದ್ಯಾಲಯಗಳ ಸಾಲಿನಲ್ಲಿ ನಿಲ್ಲುವಂತಹ ವಿಶ್ವವಿದ್ಯಾಲಯವನ್ನು ಸ್ಥಾಪಿಸಬೇಕೆಂದಿದ್ದೇನೆ ಎಂದು ಹೇಳಿದ.  ಆತ ತನ್ನ ಮಾತನ್ನು ಮುಂದುವರಿಸಿ ಇಂದು ಭಾರತದ ವಿದ್ಯಾರ್ಥಿಗಳು ಹೇಗೆ ಅಮೇರಿಕಾ, ಬ್ರಿಟನ್, ಆಸ್ಟ್ರೇಲಿಯಾ, ಸಿಂಗಪೂರ್ ದೇಶಗಳಿಗೆ ಮುಗಿಬಿದ್ದು ಉನ್ನತ ವ್ಯಾಸಂಗಕ್ಕೆ ಹೋಗುತ್ತಿದ್ದಾರೋ, ಹಾಗೆ 2030ರ ವೇಳೆಗೆ ಆ ದೇಶಗಳಲ್ಲಿನ ವಿದ್ಯಾರ್ಥಿಗಳು ಭಾರತದ ವಿಶ್ವವಿದ್ಯಾಲಯಗಳಿಗೆ ಸೇರಲು ಪೈಪೋಟಿ ನಡೆಸಬೇಕು ಎಂದ. ಅವನ ಉತ್ತರ ಕೇಳಿ ಒಂದು ಕ್ಷಣ ನನಗೆ ಏನು ಹೇಳಬೇಕೆಂದು ತೋಚಲಿಲ್ಲ.  ನಂತರ ಆತನಿಗೆ ನಿನ್ನ ಕನಸು ನನಸಾಗಲೆಂದು  ಮನಸ್ಪೂರ್ವಕವಾಗಿ ಆಶಿಸುತ್ತೇನೆ ಎಂದು ಹೇಳಿ ಕೂಡಿಸಿದೆ.  ನಂತರ ಇದರ ಬಗ್ಗೆ ಸುಧೀರ್ಘವಾಗಿ ಯೋಚಿಸತೊಡಗಿದೆ. ಇಂದಿಗೆ ಸುಮಾರು ಒಂದು ದಶಕದ ಕೆಳಗೆ ಡಾ. ಅಬ್ದುಲ್ ಕಲಾಮ್ ರವರು ಭಾರತದ ರಾಷ್ಟ್ರಪತಿ ಆದಾಗ, ಅವರು ಇಂಡಿಯ-2020 ಎಂಬ ಒಂದು ಅದ್ಭುತ ಕಲ್ಪನೆಯನ್ನು ಕೊಟ್ಟಿದ್ದರು.  ಅವರ ಕನಸನ್ನು ನನಸಾಗಿಸಲು ಹಲವು ಪ್ರಯತ್ನಗಳು ನಡೆದಿವೆ ಮತ್ತು ನಡೆಯುತ್ತಿವೆ. ಇನ್ನೊಂದು ರೀತಿಯಲ್ಲಿ ಯೋಚಿಸಿದಾಗ ನಾವು ಇನ್ನೂ 2020 ಎಂಬ ತೆಪ್ಪದಲ್ಲಿ ತೇಲುತ್ತಿದೇವೆ, ಆದರೆ ಆ 15-16 ವರುಷದ ವಿದ್ಯಾರ್ಥಿ ಆಗಲೇ 2030 ಎಂಬ ರಾಕೆಟ್ ನಲ್ಲಿ ಸಂಚರಿಸುತ್ತಿದ್ದಾನೆ ಎಂದು ಅನಿಸುತ್ತದೆ. ಇನ್ನು ಈ ನಿಟ್ಟಿನಲ್ಲಿ 2030ರ ವೇಳೆಗೆ ನಮ್ಮ ಶಿಕ್ಷಣ ಹೇಗಿರಬಹುದೆಂದು ಊಹಿಸಿದಾಗ ನನಗೆ ಕಂಡ ಒಂದು ಚಿತ್ರ ಇದು. 
ಬದಲಾವಣೆಯ ಹಾದಿಯಲ್ಲಿ ಶಾಲೆಗಳು
ಕಳೆದ ಕೆಲವು ವರುಷಗಳ ಶಾಲಾ ಸುಧಾರಣೆಯಲ್ಲಿ ಬೆಳವಣಿಗೆಯ ಅಲೆಗಳು ಕಂಡಿವೆ. ಇಂದಿನ ಶಾಲೆಗಳನ್ನು ೨೧ನೇ ಶತಮಾನದ ಮಾದರಿಯಲ್ಲಿ ರೂಪಿಸಲು ಹಲವು ಪ್ರಯತ್ನಗಳು ನಡೆದಿವೆ.  ಈ ಶಾಲೆಗಳಿಗೆ, ಆಧುನಿಕ ಸೌಲಭ್ಯಗಳನ್ನು ನೀಡಿ ಉತ್ತಮ ಬೆಳವಣಿಗೆ ತಂದಿದ್ದಾರೆ.  ನಾವು ಇದರಿಂದ ಸ್ವಲ್ಪ ಹೊರಗೆ ನಿಂತು ಯೋಚಿಸಿದಾಗ ಆ ಕಲ್ಪನೆಯು ನಮಗೆ ಕೈಗೆಟಕುವ ಅಂತರದಲ್ಲೇ ಇರುವುದು ತಿಳಿಯುತ್ತದೆ.  2030ರ ವೇಳೆಗೆ ಒಂದು ಸಮರ್ಥ, ಪರಿಣಾಮಕಾರಿ ಮತ್ತು ಸವಾಲುಗಳ ಆಧಾರಿತ ಪ್ರಭಾವಿ ಶಿಕ್ಷಣ ವ್ಯವಸ್ಥೆಯನ್ನು ರೂಪಿಸಲು ಏನು ಬೇಕು ಎಂದು ಬೇರೆ ಬೇರೆ ರೀತಿಯಲ್ಲಿ ಯೋಚಿಸಿ ನೋಡಿದಾಗ ಅದರ ಒಂದು ಪಕ್ಷಿ ನೋಟ ನಮಗೆ ಸಿಗುತ್ತದೆ.  2030ರ ವೇಳೆಗೆ ಶಾಲಾ ವಿನ್ಯಾಸ ಮತ್ತು ಅಲ್ಲಿನ ವಾತಾವರಣ ಹೇಗಿರಬೇಕೆಂದು ಊಹಿಸಿ ಅದಕ್ಕೆ ಸರಿಯಾದ ಸೂಚನೆ ನೀಡಬಹುದು.  ಕಲಿಕೆಯು ಹಲವು ರೂಪಗಳಲ್ಲಿ ಬರಬಹುದು; ಸ್ವಂತ ಪ್ರಯತ್ನ ಅಥವಾ ವಿದ್ಯಾರ್ಥಿಗಳ ಸಣ್ಣ ಗುಂಪಿನಲ್ಲಿ ನಡೆಯುವ ಕಲಿಕೆಯ ಆಳ ಮತ್ತು ಮನವರಿಕೆ ಹೆಚ್ಚಾಗಿರುತ್ತದೆ ಮತ್ತು ಅದು ಹೆಚ್ಚು ಕಾಲ ಜೀವಂತವಾಗಿರುತ್ತದೆ.  ವಿದ್ಯಾರ್ಥಿಗಳು ಕಲಿಸಲೂಬಹುದು ಮತ್ತು ಕಲಿಯಲೂಬಹುದು. ಆ ಕಲಿಕೆ ಮತ್ತು ಕಲಿಸುವಿಕೆ ಸ್ನೇಹಿತರ ಜೊತೆ, ಅಣ್ಣ-ತಮ್ಮಂದಿರ ಜೊತೆ, ಪೋಷಕರ ಮತ್ತು ಮಕ್ಕಳ ಜೊತೆ ಹೀಗೆ ಅನೇಕ ರೀತಿಯಲ್ಲಿ ಇರಬಹುದು. ಇಂತಹ ಕಲಿಕೆಯು ತರಗತಿಯ ಕಲಿಕೆಗಿಂತ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ.  ಕಲಿಕೆಯಲ್ಲಿ ಆಸಕ್ತಿ ಮತ್ತು ಸ್ಪೂರ್ತಿ ಇದ್ದಾಗ, ವಿದ್ಯಾರ್ಥಿಗಳ ಗುಂಪು ಕಲಿಕೆಯ ಮೇಲೆ ಯಾವುದೇ ಪರಿಣಾಮಬೀರುವುದಿಲ್ಲ. ಮಕ್ಕಳ ಪ್ರಚಂಡ ಚುರುಕುತನ ಮತ್ತು ಸಾಮರ್ಥ್ಯವನ್ನು ಗಮನಿಸಿ, ಈ ಲಕ್ಷಣಗಳನ್ನು ಅವರ ಚಿಕ್ಕ ವಯಸ್ಸಿನಲ್ಲೇ ಕಲಿಸಬಹುದು. 
ಭವಿಷ್ಯದ ಶಾಲೆಗಳು
ಇಂತಹ ಕಲ್ಪನೆಗಳ ಆಧಾರದ ಮೇಲೆ ಭವಿಷ್ಯದ ಶಾಲೆಗಳು ಹೇಗಿರಬಹುದೆಂದು ಊಹಿಸಿಕೊಳ್ಳಬಹುದು.  ಭವಿಷ್ಯದ ಅತ್ಯುತ್ತಮ ಶಾಲೆಗಳು ಪುರಾತನ ಶಾಲೆಗಳ ಕೆಲವು ಅಂಶಗಳನ್ನು ಅಳವಡಿಸಿಕೊಳ್ಳಬಹುದು. ಈ ಶಾಲೆಗಳಲ್ಲಿ ಅರ್ಹ ಶಿಕ್ಷಕರ ಮಾರ್ಗದರ್ಶನದಲ್ಲಿ ಹಳೆಯ ವಿದ್ಯಾರ್ಥಿಗಳೇ ಬೋಧಕರಾಗಿ ಕೆಲಸ ಮಾಡಬಹುದು. ಇದರಿಂದ, ಪುರಾತನ ಶಾಲಾ ವ್ಯವಸ್ಥೆಗೆ ಆಧುನಿಕ ಯುಗದ ಹೊಸ ಜೀವಂತಿಕೆ ಕೊಟ್ಟಂತಾಗುತ್ತದೆ. ಇದರ ಜೊತೆಯಲ್ಲಿ, ತಂತ್ರಜ್ಞಾನದ ಸಹಾಯ ಪಡೆದಾಗ ಕಲಿಕೆಯು ತುಂಬಾ ಚನ್ನಾಗಿರುತ್ತದೆ.  ಒಂದನೇ ತರಗತಿಯಲ್ಲಿ ವಿದ್ಯಾರ್ಥಿಯು ಸ್ವಂತ ಕಲಿಕೆಯಲ್ಲಿ ದಿನದ ಒಂದು ಘಂಟೆ ಕಳೆದರೆ, ಮೂರನೇ ತರಗತಿಯಲ್ಲಿ ಎರಡು ಘಂಟೆ, ಆರನೇ ತರಗತಿಯಲ್ಲಿ ಅರ್ಧ ದಿನ, ಮತ್ತು ಪ್ರೌಢಶಾಲೆಯಲ್ಲಿ ದಿನದ ಶೇಕಡಾ ಮೂರನೇ ಒಂದು ಭಾಗದಷ್ಟು ಸಮಯ ಸ್ವಂತ ಕಲಿಕೆಯಲ್ಲಿ ನಿರತನಾಗಿರುತ್ತಾರೆ. ಸ್ವಂತ ಅಥವ ವೈಯಕ್ತಿಕ ಕಲಿಕೆ ಎಂದಾಗ ಅರ್ಹ ಶಿಕ್ಷಕರ ಮೇಲ್ವಿಚಾರಣೆಯಲ್ಲಿ ನಡೆಯುತ್ತವೆ. ಕಲಿಕೆಯು ತರಗತಿಯ ಹೊರಗೆ ಅಥವಾ ಒಳಗೆ ಎಲ್ಲೇ ಆದರೂ ಅದು ಶಾಲೆಯ ಆವರಣದಲ್ಲೇ ನಡೆಯುತ್ತದೆ. ಬೆಳವಣಿಗೆಯ ಸಮಯದಲ್ಲಿ ಮಕ್ಕಳನ್ನು ಮಕ್ಕಳನ್ನಾಗಿರಲು ಬಿಟ್ಟು ಅವರ ಆಟ-ಪಾಠಗಳನ್ನು ಸೂಕ್ಷ್ಮವಾಗಿ ಗಮನಿಸಬಹುದು.  ಮಕ್ಕಳಿಗೆ ಹೆಚ್ಚು ಕಟ್ಟುಪಾಡುಗಳನ್ನು ಹಾಕಿ ದೊಡ್ಡವರಂತೆ ನಡೆಯಲು ಬಲವಂತ ಮಾಡಿದರೆ ಅವರಿಗೆ ಬಾಲ್ಯದ ಮೋಜು ತಪ್ಪಿಸಿದಂತೆ ಆಗುತ್ತದೆ. ಇಂತಹ ಕಲಿಕಾ ವಿಧಾನದಿಂದ ವಿದ್ಯಾರ್ಥಿಯು ವಿಷಯ ಜ್ಞಾನದಲ್ಲಿ ನಿಪುಣನಾಗುತ್ತಾನೆ, ಸೃಜನಾತ್ಮಕವಾಗಿ ಸಮಸ್ಯೆಗಳನ್ನು ಬಗೆಹರಿಸಲು ಕಲಿಯುತ್ತಾನೆ; ಅಗಾಧ ಜ್ಞಾನವನ್ನು ಪಡೆಯುವ ಮೊದಲು ಅದನ್ನು ಪರೀಕ್ಷೆ ಮಾಡಿ ಸರಿ ಎನಿಸಿದ್ದನ್ನು  ಆರಿಸಿಕೊಳ್ಳುವ ಶಕ್ತಿ ಬೆಳೆಸಿಕೊಳ್ಳುತ್ತಾನೆ. ಇದರಿಂದ, ವಿದ್ಯಾರ್ಥಿಗಳಲ್ಲಿನ ಸಾಧನೆಯ ಅಂತರ ಮತ್ತು ಸಾಂಪ್ರದಾಯಿಕ ವಿಧಾನಗಳ ಅನುಸರಣೆ ಕಡಿಮೆಯಾಗುತ್ತದೆ. ಇದರ ಜೊತೆಯಲ್ಲಿ, ಕಡಿಮೆ ಪಠ್ಯಕ್ರಮ ಮತ್ತು ಶಾಲಾ ಸುಧಾರಣೆಯಿಂದ ಯಾವ ವಿದ್ಯಾರ್ಥಿಯೂ ಹಿಂದುಳಿದಂತೆ ಆಗುವುದಿಲ್ಲ. ಶಿಕ್ಷಕರನ್ನು ಗುಣಮಟ್ಟದ ಪರೀಕ್ಷೆಯ ಆಧಾರದಮೇಲೆ ಆಯ್ಕೆಮಾಡಿ, ಆ ಕಾಲಕ್ಕೆ ಲಭ್ಯವಿರುವ ತಂತ್ರಜ್ಞಾನದ ಆಧಾರದ ಮೇಲೆ ನಿರ್ಮಿಸುವ ಉಪಕರಣಗಳನ್ನು ಬಳಸಿ ಅದರ ಸಹಾಯದಿಂದ ಮಾರ್ಗದರ್ಶನ ನೀಡುವಂತಾಗಬಹುದು.
ಶಿಕ್ಷಣಶಾಸ್ತ್ರಜ್ಞ
2030ರ ವೇಳೆಗೆ ನಮ್ಮ ವಿದ್ಯಾರ್ಥಿಗಳಿಗೆ ಬೇಕಾದ ಮೂಲಭೂತ ಶಿಕ್ಷಣವೇನು ಎಂದು ಯೋಚಿಸಿದಾಗ ಕಣ್ಮುಂದೆ ಬರುವುದು ೪ ಮುಖ್ಯ ಗುಣಗಳು: ಸಂವಹನ ಕಲೆ, ಹೊಂದಾಣಿಕೆ, ವಿಭಿನ್ನ ಆಲೋಚನೆ ಮತ್ತು ಸೃಜನಶೀಲ ಬೆಳವಣಿಗೆ. ಇವೆಲ್ಲವನ್ನೂ ಪರಿಣಾಮಕಾರಿ ಶಿಕ್ಷಕರು ಮಾತ್ರವೇ ನೀಡಲು ಸಾಧ್ಯ. ಈರೀತಿಯ ಕಲಿಕೆಯಲ್ಲಿ ವಿವಿಧ ವಿದ್ಯಾರ್ಥಿಗಳೊಂದಿಗೆ ಕೂಡಿ ಕೆಲಸ ಮಾಡುವುದು, ಸರಿಯಾದ ಮಾಹಿತಿಯ ಸಂಗ್ರಹಣೆ, ಸಮುದಾಯದ ಅಗತ್ಯಕ್ಕೆ ತಕ್ಕಂತ ಬೋಧನೆ ಮತ್ತು ವಿದ್ಯಾರ್ಥಿಗಳಿಗೆ ತಮ್ಮ ಕಲಿಕೆಯನ್ನು ತಾವೇ ವಿಚಾರಣೆ ಮಾಡಿಕೊಳ್ಳುವಂತಹ ಸಾಮರ್ಥ್ಯಗಳನ್ನು ಬೆಳಸಬೇಕು. ಇದೆಲ್ಲವನ್ನೂ ನಿರ್ವಹಿಸುತ್ತಾ ವಾಣಿಜ್ಯೋದ್ಯಮಿ ಮತ್ತು ಬೋಧಕ ಎರಡೂ ಆಗುವ ಶಿಕ್ಷಕರಿಗೆ "ಶಿಕ್ಷಣಶಾಸ್ತ್ರಜ್ಞ" ಎಂಬ ಹೆಸರು ಸಮಂಜಸವೆನಿಸುತ್ತದೆ. ಶಿಕ್ಷಣಶಾಸ್ತ್ರಜ್ಞರು ಉತ್ತಮ ಶಿಕ್ಷಕರು ಮತ್ತು ದೂರದೃಷ್ಟಿ ಹೊಂದಿರಬೇಕು.  ಇವರು ಸದಾ ವಿದ್ಯಾರ್ಥಿ ಅಥವಾ ವಿದ್ಯಾರ್ಥಿ ಬಳಗದ ಸಕ್ರಿಯ ಬೋಧನೆಯಲ್ಲಿ ತೊಡಗಿರಬೇಕು; ಶಾಲೆಗಳಲ್ಲಿ ಭಾವನಾತ್ಮಕ ಸಂಬಂಧವನ್ನು ಸೃಷ್ಟಿಸಬೇಕು; ಅನುಭವದ ಅಲೆಗಳನ್ನು ಹರಡಬೇಕು; ಇವರು ಕಲಿಕೆಯ ಅದ್ಭುತ ವಾಸ್ತುಶಿಲ್ಪಿಗಳು ಮತ್ತು ನಾಯಕರು; ಉತ್ತಮ ಮಾಹಿತಿ ತಜ್ಞರು ಮತ್ತು ಸಮುದಾಯದ ಬೆಳವಣಿಗೆಗೆ ಆಧಾರಸ್ತಂಭಗಳು; ಉತ್ತಮ ಸಂಶೋಧಕರು; ಮತ್ತು ಕೆಲಸದ ನಡುವೆ ಬರುವ ತೊಂದರೆಗಳನ್ನು ಚನ್ನಾಗಿ ನಿರ್ವಹಿಸಿಕೊಂಡು ಹೋಗುವವರಾಗಿರಬೇಕು. ಶಿಕ್ಷಣಶಾಸ್ತ್ರಜ್ಞರಿಗೆ ತರಬೇತಿ ನೀಡುವಾಗ, ಯಾವ ಶೈಕ್ಷಣಿಕ ಸಂಪತ್ತುಗಳ ಮೇಲೆ ಅವಲಂಬಿತರಾಗಬೇಕು ಎಂಬುದನ್ನು ನಿರ್ಧರಿಸಬೇಕು. ಇವರು ತಮ್ಮ ಬುದ್ಧಿವಂತಿಕೆಯಿಂದ ಜಿಲ್ಲೆಗಳ, ವಿಶ್ವವಿದ್ಯಾಲಯಗಳ, ಸಮುದಾಯ ಆಧರಿತ ಸಂಸ್ಥೆಗಳ, ಮತ್ತು ಸಾಮಾಜಿಕ ಮತ್ತು ಆರೋಗ್ಯ ಸಂಸ್ಥೆಗಳ ನಡುವಣ ಉತ್ತಮ ಸಂಬಂಧ ಕಲ್ಪಿಸಬೇಕು.  ನಂತರ, ಇವರು ಎಂದು, ಎಲ್ಲಿ, ಏನನ್ನು, ಯಾರು ಬೋಧಿಸಬೇಕೆಂದು ತಿಳಿದು ಅದಕ್ಕೆ ಉತ್ತಮ ಸಿದ್ಧತೆ ನಡೆಸಿಕೊಳ್ಳಬೇಕು. ಇದರ ಜೊತೆಯಲ್ಲಿ ಯಾರು, ಹೇಗೆ, ಉತ್ತಮವಾಗಿ ಕೆಲಸ ನಿರ್ವಹಿಸುತ್ತಿದ್ದಾರೆ ಮತ್ತು ಇದನ್ನು ಮುಂದುವರಿಸಲು ಏನು ಮಾಡಬೇಕು ಎಂಬ ಆಲೋಚನೆಯನ್ನು ಮಾಡಬೇಕಾಗುತ್ತದೆ.  ಶಿಕ್ಷಕರು ಒಂದು ತಂಡದಲ್ಲಿ ಪರಿಣಾಮಕಾರಿಯಾಗಿ ಬೋಧಿಸುತ್ತಾರೆಯೇ ಎಂದು ತಿಳಿದುಕೊಳ್ಳಬೇಕು.  ಸ್ಥಳೀಯ ಮತ್ತು ಜಾಗತಿಕಮಟ್ಟದಲ್ಲಿ ಶಿಕ್ಷಕರ ಸಂಬಂಧವನ್ನು ಉತ್ತಮಗೊಳಿಸಲು ವಿಶಿಷ್ಟ ಕೌಶಲ್ಯವನ್ನು ಹೊಂದಿರಬೇಕು. ಈ ನಿಟ್ಟಿನಲ್ಲಿ ಎಲ್ಲರಿಗೂ ಒಂದು ಪಾತ್ರವಿರುತ್ತದೆ. 2030ರಲ್ಲಿ ಬೋಧನೆಯ ಉದ್ದೇಶವು ದುರ್ಬಲ ವಿದ್ಯಾರ್ಥಿಗಳನ್ನು ಶಿಕ್ಷಣದಿಂದ ಕೇವಲ ಮೇಲೆತ್ತುವ ಪ್ರಯತ್ನವಾಗಿರದೆ, ಅದರ ಜೊತೆಯಲ್ಲಿ ಶಿಕ್ಷಕರನ್ನು ಮೀರಿಸಿ ಬೆಳೆಯುವ ವಿದ್ಯಾರ್ಥಿಗಳಿಗೆ ಬೆಂಬಲ ನೀಡುವಂಥದ್ದಾಗಿರಬೇಕು. ೨೧ನೇ ಶತಮಾನದ ವಿದ್ಯಾರ್ಥಿಗಳನ್ನು ಬೋಧನೆಗೆ ತಯಾರು ಮಾಡಲು ಶಾಲೆಗಳಲ್ಲಿ ಪಾಠ ಮಾಡುವವರಿಗೂ ಮತ್ತು ಅವರನ್ನು ಮುನ್ನಡೆಸುವವರಿಗೂ ಇರುವ ಅಂತರವನ್ನು ಅಳಿಸಿಹಾಕಬೇಕು.  ಆಗ 2030ರ ಶ್ರೇಷ್ಠ ಶಿಕ್ಷಕರನ್ನು ಹಲವು ತೊಡಕುಗಳ ನಡುವೆಯೂ ನಿಜವಾದ ಸಾರ್ವಜನಿಕ ಶಿಕ್ಷಣಕ್ಕೆ ಅಣಿ ಮಾಡಿಕೊಟ್ಟ ಮತ್ತು ಬೋಧನಾ ವೃತ್ತಿಯ ಬಗ್ಗೆ ಸಂಪೂರ್ಣ ಅರಿವು ಮೂಡಿಸಿದವರೆಂದು ಮುಂದಿನ ಪೀಳಿಗೆ ನೆನಪಿನಲ್ಲಿಟ್ಟುಕೊಳ್ಳುತ್ತಾರೆ. ಇಂದು ವೃತ್ತಿಯನ್ನು ಪ್ರವೇಶಿಸುತ್ತಿರುವ ಶಿಕ್ಷಕರು ೨೦೩೦ರ ವೇಳೆಗೆ ತಮ್ಮ ವೃತ್ತಿ ಜೀವನದ ಅರ್ಧದಾರಿ ಪ್ರಯಾಣಿಸಿ ಅದರಲ್ಲಿ ಪರಿಣಿತರಾಗಿರುತ್ತಾರೆ.  ಇಂದಿನ ಪ್ರೌಢಶಾಲಾ ವಿದ್ಯಾರ್ಥಿಗಳು ೨೦೩೦ ರಲ್ಲಿ  ವೇಳೆಗೆ ಮಾಧ್ಯಮಿಕ ಅಥವಾ ಪ್ರೌಢಶಾಲೆಗಳಲ್ಲಿ ಪೋಷಕ-ಶಿಕ್ಷಕ ಸಮಾವೇಶಗಳಲ್ಲಿ ಭಾಗವಹಿಸುತ್ತಿರುತ್ತಾರೆ. ಈ ಬದಲಾವಣೆಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ಇತಿಹಾಸ ಮರುಕಳಿಸುವ ನಂಬಿಕೆ  ಬಲವಾಗುತ್ತದೆ. ಪುರಾತನ ಶಿಕ್ಷಣ ವ್ಯವಸ್ಥೆಯು ಈ ಎಲ್ಲಾ ಗುಣಗಳನ್ನು ತನ್ನ ಬೋಧನೆಯಲ್ಲಿ ಅಳವಡಿಸಿಕೊಂಡಿತ್ತು. ಶತಮಾನಗಳು ಕಳೆದಂತೆ ಬದಲಾವಣೆಗಳು ಆಗುತ್ತಾ ಆ ಕಾಲದ ವ್ಯವಸ್ಥೆಗೆ ಮರುಕಳಿಸುತ್ತಿದ್ದೇವೆ ಎಂದು ಅನಿಸುತ್ತದೆ. ಈ ಎಲ್ಲಾ ಕನಸುಗಳನ್ನು ನನಸು ಮಾಡುವ ಉಜ್ವಲ, ಕಾಂತಿಯುತ ಭವಿಷ್ಯವನ್ನು ಉತ್ಸಾಹದಿಂದ ಕಾದು ನೋಡೋಣ.   

19 December 2011

ಶಿಕ್ಷಕ, ಶಿಕ್ಷಣದ ಬವಣೆ-ಬದಲಾವಣೆ

ಪಿಯುಸಿ ತರಗತಿಯಲ್ಲಿ ಕುಳಿತು ಇಂಗ್ಲಿಷ್ ಪಾಠ ಕೇಳುತಿದ್ದ ವಿದ್ಯಾರ್ಥಿಗಳಲ್ಲಿ ಒಬ್ಬ ತನ್ನ ಸ್ನೇಹಿತನಿಗೆ ಹೇಳಿದ "ಏನ್ ಗುರು, ಪುಸ್ತಕದಲ್ಲಿ ಇರುವ ವಿಷಯವನ್ನು ಸುಮ್ಮನೆ ಓದಿಕೊಂಡು ಹೋಗುತ್ತಿದ್ದಾರೆ ಈ ಮೇಷ್ಟ್ರು, ವಿವರಣೆ ಕೊಡೋದೇ ಇಲ್ಲವಲ್ಲ.  ತಕ್ಷಣ ಆ ಸ್ನೇಹಿತ ಕೇಳಿದ, "ನೀನು ಕಾಲೇಜಿನ ಪ್ರಾಸ್ಪೆಕ್ಟಸನ್ನು ಸರಿಯಾಗಿ ನೋಡಿದೀಯಾ?" ಅವನು ಮಾತನ್ನು ಮುಂದುವರಿಸಿ ಹೇಳಿದ, "ಅದರಲ್ಲಿ ಇವರ ಹೆಸರಿನ ಪಕ್ಕದಲ್ಲಿ "ರೀಡರ್ " ಅಂತ ಹಾಕಿದ್ದಾರೆ." 
ಇದು ಕೇವಲ ಒಂದು ಶಾಲೆ ಅಥವಾ ಕಾಲೇಜಿನ ಕಥೆಯಲ್ಲ. ಇಂತಹ ಸನ್ನಿವೇಶಗಳು ಬಹುತೇಕ ಶಾಲಾ-ಕಾಲೇಜುಗಳಲ್ಲಿ ದಿನನಿತ್ಯ ನಡೆಯುತ್ತಿರುವ ಸಂಗತಿ.  ಒಂದೆರಡು ದಶಕಗಳ ಕೆಳಗೆ ಕೂಡ ಶಿಕ್ಷಕ ವೃತ್ತಿ ಒಂದು ಗೌರವಾನ್ವಿತ ಮತ್ತು ಪೂಜನೀಯ ಕೆಲಸವಾಗಿತ್ತು. ಆದರೆ, ಇಂದು ಶಿಕ್ಷಕ ವೃತ್ತಿಗೆ ಬರುವವರ ಸಂಖ್ಯೆ ತೀರಾ ಕಡಿಮೆ; ಒಂದುವೇಳೆ ಬಂದರೂ ಇಷ್ಟಪಟ್ಟು ಬರುವವರಿಗಿಂತ ಕಷ್ಟಪಟ್ಟು ಬರುವವರೇ ಹೆಚ್ಚು. ಇದರಿಂದ, ಅವರು ಹೇಗೋ ಬಂದು, ಒಂದು ತಾಸು ಪಾಠ ಹೇಳಿ ಹೋದರೆ ಮುಗಿಯಿತು ಎಂಬ ಆಲೋಚನೆಯಲ್ಲಿ ಇರುತ್ತಾರೆ.  ಇದರಿಂದಾಗಿ, ವಿದ್ಯಾರ್ಥಿಗಳು ಕಲಿಕೆಯನ್ನು ರಸವತ್ತಾಗಿ ಆನಂದಿಸುವ ಬದಲು, ಯಂತ್ರದಂತೆ ಕೇವಲ ಅಂಕಗಳ ಮೊರೆಹೋಗುತ್ತಿದ್ದಾರೆ.  ನಮ್ಮ ಶಾಲಾ-ಕಾಲೇಜುಗಳಲ್ಲಿ ಬಹುಪಾಲು ಪರೀಕ್ಷೆಯ ದೃಷ್ಟಿಕೋನದಲ್ಲಿ ಪಾಠ ಮಾಡುತ್ತಾರೆಯೇ ಹೊರತು ಜ್ಞಾನದ ಬೆಳವಣಿಗೆಗಲ್ಲ.  ಇಂತಹ ಒಂದು ಪರಿಸರ ಸೃಷ್ಟಿಯಾಗಲು ಶಿಕ್ಷಕರ ನಿರಾಸಕ್ತಿಯೇ ಕಾರಣವೆಂದು ಹೇಳಬಹುದು.  ನಮ್ಮ ಬಹುತೇಕ ಮಂದಿ ಶಿಕ್ಷಕರು ಕೇವಲ ೩-೪ ವರುಷ ಅನುಭವ ಆದರೆ ಸಾಕು, ತರಗತಿಗೆ ಪೂರ್ವಸಿದ್ಧತೆ ಇಲ್ಲದೆಯೇ ಬರುವ ಹಲವು ಉದಾಹರಣೆಗಳಿವೆ.  ಇದರಿಂದ, ಅವರ ಕಲಿಕಾ ಸಾಮರ್ಥ್ಯ ಕುಗ್ಗಿ, ನಿರಾಸಕ್ತಿ ಉಂಟಾಗುತ್ತದೆ.  ಹೊಸ ವಿಚಾರಗಳು, ಉದಾಹರಣೆಗಳು ಮೂಡುವ ಅಥವ ನೀಡುವ ಸಾಧ್ಯತೆ ನಶಿಸಿಹೋಗುತ್ತದೆ.  ಮುಂದೆ ಅವರು ೨೫-೩೦ ವರುಷ ಅದೇ ಪಾಠವನ್ನು, ವಿಚಾರವನ್ನು ಅದೇರೀತಿ ಬೋಧಿಸಿದಾಗ ಅದು ಸ್ವಾರಸ್ಯವಿಲ್ಲದ ಮತ್ತು ಸತ್ವವಿಲ್ಲದ ವಿಚಾರ ವಿನಿಮಯವಾಗುತ್ತದೆ.  ಶಿಕ್ಷಕರು ತಮಗೆ ಎಲ್ಲವೂ ಗೊತ್ತಿದೆ, ಇನ್ನು ತಾವು ಓದುವ ಅವಶ್ಯಕತೆಯೇ ಇಲ್ಲವೆಂಬ ಮುಖವಾಡವನ್ನು ತೊಟ್ಟು ಅಗಾಧ ಜ್ಞಾನ ಸಾಗರದಲ್ಲಿ ಈಜಲು ಪ್ರಯತ್ನಿಸಿ, ತಮಗರಿವಿಲ್ಲದಂತೆ ಮುಳುಗಿ ಹೋಗಿರುತ್ತಾರೆ.  ಇನ್ನು ವಿಜ್ಞಾನದ ವಿಷಯ. ಅನೇಕ ವೈಜ್ಞಾನಿಕ ವಿಚಾರಗಳನ್ನು ಹೆಚ್ಚು ಸೈದ್ಧಾಂತಿಕವಾಗಿ ಬೋಧಿಸಲಾಗುತ್ತಿದೆ; ಅದಕ್ಕೆ ಸೂಕ್ತವಾದ ಪ್ರಯೋಗಗಳನ್ನು ಮಾಡಿತೋರಿಸದ ಕಾರಣ ಅದರಿಂದ ವಿದ್ಯಾರ್ಥಿಗಳು ದೂರವಾಗುತ್ತಿರುವ ಪರಿಸ್ಥಿತಿ ಇಂದು ಒದಗಿದೆ.  ಇದರಿಂದಾಗಿ, ನಮ್ಮಲ್ಲಿ ಕೇವಲ ವಿಜ್ಞಾನದ ವಿದ್ಯಾರ್ಥಿಗಳು ತಯಾರಾಗುತ್ತಿದ್ದಾರೆಯೇ ಹೊರತು ವಿಜ್ಞಾನಿಗಳನ್ನಲ್ಲ.  ಇಂದು ಭಾರತ ತಂತ್ರಜ್ಞಾನದಲ್ಲಿ ಮುನ್ನಡೆಯುತ್ತಿದೆ ಎನ್ನಬಹುದೇ ವಿನಃ ವಿಜ್ಞಾನದಲ್ಲಲ್ಲ. ಯಾವುದೇ ದೇಶದ ತಂತ್ರಜ್ಞಾನ ಬೆಳೆಯಬೇಕಾದರೆ, ಅದಕ್ಕೆ ವಿಜ್ಞಾನದ ಬೆಂಬಲ ಬಹಳ ಮುಖ್ಯ.  ವಿಜ್ಞಾನ ತಾಯಿಬೇರು, ತಂತ್ರಜ್ಞಾನದ ಅನೇಕ ಮುಖಗಳು ಮರದ ಶಾಖೋಪಶಾಖೆಗಳು. ತಾಯಿಬೇರು ನೀರುಂಡಾಗ ಶಾಖೋಪಶಾಖೆಗಳು ತಾವಾಗಿಯೇ ಸಮೃದ್ಧವಾಗುತ್ತವೆ. ಇದನ್ನರಿತು ಕೇವಲ ತಂತ್ರಜ್ಞಾನವನ್ನಾಲಿಸದೆ ವಿಜ್ಞಾನದ ಬೆಳವಣಿಗೆಗೂ ಒತ್ತು ನೀಡಬೇಕು. 

ಶಿಕ್ಷಕರ ಸಬಲೀಕರಣ
ಇನ್ನೊಂದು ರೀತಿಯಲ್ಲಿ ಯೋಚಿಸಿದಾಗ, ಶಿಕ್ಷಕರಿಗೆ ಪ್ರೋತ್ಸಾಹ ಮತ್ತು ಸರಿಯಾದ ಮಾರ್ಗದರ್ಶನ ಸಿಗುತ್ತಿಲ್ಲವೆಂದು ಅನ್ನಿಸುತ್ತದೆ.  ಇಂದಿನ ಶಾಲಾ-ಕಾಲೇಜುಗಳ ಯಜಮಾನರು ಶಿಕ್ಷಕರಿಗಿಂತ ಹೆಚ್ಚು ಕಟ್ಟಡಕ್ಕೆ ಮತ್ತು ಸೌಲಭ್ಯಗಳಿಗೆ ಒತ್ತು ನೀಡುತ್ತಿರುವುದು ಗೋಚರಿಸುತ್ತದೆ.  ಎರಡು ಬಾರಿ ನೊಬೆಲ್ ಪ್ರಶಸ್ತಿಯನ್ನು ಪಡೆದ ಖ್ಯಾತ ವಿಜ್ಞಾನಿ ಲೈನಸ್ ಪೌಲಿಂಗ್ ಒಮ್ಮೆ ಭಾರತಕ್ಕೆ ಬಂದಿದ್ದಾಗ ವಿಕ್ರಂ ಸಾರಾಬಾಯ್ ರವರು ಅವರನ್ನು ದಿಲ್ಲಿಯ ಸುತ್ತಮುತ್ತಲೂ ಇದ್ದ ಕೆಲವು ಉತ್ತಮ ಶಾಲೆಗಳಿಗೆ ಕರೆದುಕೊಂಡು ಹೋಗಿದ್ದರು.  ಮರುದಿನ ಆ ಭೇಟಿಯ ಬಗ್ಗೆ ಪೌಲಿಂಗ್ ಅವರ ಅಭಿಪ್ರಾಯವನ್ನು ಸಾರಾಬಾಯ್ ಕೇಳಿದಾಗ ಪೌಲಿಂಗ್ ಉತ್ತರಿಸಿದ್ದು ಹೀಗೆ; "ಭಾರತೀಯ ಶಾಲೆಗಳಲ್ಲಿ ಪ್ರಥಮ ದರ್ಜೆ ಕಟ್ಟಡಗಳಿವೆ, ದ್ವಿತೀಯ ದರ್ಜೆ ಪ್ರಯೋಗಾಲಯಗಳಿವೆ ಮತ್ತು ತೃತೀಯ ದರ್ಜೆ ಶಿಕ್ಷಕರಿದ್ದಾರೆ." ಪೌಲಿಂಗ್ ತಮ್ಮ ಮಾತನ್ನು ಮುಂದುವರಿಸಿ, "ಶಾಲೆಗಳ ಗ್ರಂಥಾಲಯಗಳಿಗೆ ಭೇಟಿಕೊಟ್ಟಾಗ ಅಲ್ಲಿರುವ ಪುಸ್ತಕಗಳ ಕೊನೆಯ ಪುಟವನ್ನು ತೆರೆದು ನೋಡಿದೆ.  ಅದರಲ್ಲಿ ಎಷ್ಟು ಮಂದಿ ಶಿಕ್ಷಕರು ಆ ಪುಸ್ತಕವನ್ನು ಓದಿದ್ದಾರೆ ಎಂದು ನೋಡಿದೆ; ಆಗ ನನಗೆ ಕೇವಲ ಬೆರಳೆಣಿಕೆಯಷ್ಟು ಹೆಸರುಗಳು ಮಾತ್ರ ಕಂಡವು. ನಿಮ್ಮ ಬಹಳಷ್ಟು ಶಿಕ್ಷಕರ ಕಣ್ಣುಗಳಲ್ಲಿ ವಿಷಯದ ಬಗ್ಗೆ ತಹತಹಿಕೆ ಮತ್ತು ಕುತೂಹಲ ಕಾಣಲಿಲ್ಲ" ಎಂದು ವಿಷಾದಿಸಿದರು.  ನಮಗೆ ನಿಜವಾದ ಶಿಕ್ಷಣವನ್ನು ಆಡಂಬರದ ಸೌಲಭ್ಯಗಳು ನೀಡಲು ಸಾಧ್ಯವಿಲ್ಲ, ಆದರೆ ಒಬ್ಬ ಒಳ್ಳೆ ಶಿಕ್ಷಕ ನೀಡಬಹುದು. 

ಶಿಕ್ಷಣ ಸಮಗ್ರ ಜೀವನಕ್ಕಾಗಿಯೇ ಹೊರತು, ಜೀವನ ನಡೆಸುವುದಕ್ಕಾಗಿ ಅಲ್ಲ.  ಆದ್ದರಿಂದ, ಶಿಕ್ಷಕರು ವಿದ್ಯಾರ್ಥಿಗಳಿಗೆ ಪಾಠ ಮಾಡುವುದರ ಜೊತೆಗೆ, ಜೀವನದಲ್ಲಿ ಕಷ್ಟ, ಸುಖ, ವ್ಯಕ್ತಿ, ವಿಚಾರ ಹೀಗೆ ಅನೇಕ ಸಂದರ್ಭಗಳನ್ನು ಎದುರಿಸುವ ಮತ್ತು ಅದರಿಂದ ಹೊರಬರುವ ಉಪಾಯಗಳನ್ನು ಬೋಧಿಸಬೇಕಾಗಿದೆ.  ಇಂದಿನ ಶಿಕ್ಷಕರಲ್ಲಿ ಪುಸ್ತಕಗಳನ್ನು ಓದುವ ಹವ್ಯಾಸ ಬಹಳಷ್ಟು ಕಡಿಮೆಯಾಗಿದೆ.  ಶಿಕ್ಷಕರು ತಮ್ಮ ಜೀವನದ ಅನುಭವಗಳ ಜೊತೆಗೆ ಪುಸ್ತಕಗಳಲ್ಲಿ ಪಡೆದ ಜ್ಞಾನವನ್ನು ವಿದ್ಯಾರ್ಥಿಗಳಿಗೆ ಹಂಚಿದಾಗ, ಅದರಿಂದ ಪ್ರೇರಣೆ ಪಡೆದು ವಿದ್ಯಾರ್ಥಿಗಳು ಹೆಚ್ಚು ವಿಷಯ ಸಂಗ್ರಹಣೆಗೆ ಒಲವು ತೋರುತ್ತಾರೆ. ಶಿಕ್ಷಕರು ಪಾಠಮಾಡುವ ಮೊದಲು ಪರಿಶ್ರಮವಹಿಸಿ ಕಲಿಸುವ ವಿಷಯದಲ್ಲಿ ಸಾಧನೆ ಮಾಡಬೇಕಾಗುತ್ತದೆ.   ಸಾಧನೆಯಿಲ್ಲದ ಬೋಧನೆ ಕೇವಲ ವೇದನೆಯಾಗುತ್ತದೆ. ಇದಕ್ಕೇ ಇಂಗ್ಲಿಷ್ ನಲ್ಲಿ "To teach you need a book but to preach you should become a book" ಎಂದು ಹೇಳುವ ಮಾತು ಸೂಕ್ತವೆನಿಸುತ್ತದೆ.  ಯಾವುದೇ ವಿಷಯ ನಮ್ಮಲ್ಲಿ ದೀರ್ಘಕಾಲ ಉಳಿಯಬೇಕಾದರೆ ಮೊದಲು ಆ ವಿಷಯವನ್ನು ಅರ್ಥಮಾಡಿಕೊಳ್ಳಬೇಕು ನಂತರ, ನಮ್ಮ ಜೀವನದಲ್ಲಿ ಸಾಧ್ಯವಾದಷ್ಟು ಅದನ್ನು ಅಳವಡಿಸಿಕೊಳ್ಳಬೇಕು.  ಆಗ ವಿಷಯವು ಕೇವಲ ಮೌಖಿಕ ಸಂಭಾಷಣೆಯಾಗದೆ ಅಂತರಾಳದ ಒಲವಾಗಿ ಚಿಮ್ಮುತ್ತದೆ.  ಶಿಕ್ಷಕರಿಗೆ ಮಾಡುವ ಪಾಠದಲ್ಲಿ ಒಲವು ಇದ್ದಲ್ಲಿ ಕೇವಲ ಅವರ ಬಾಯಿ ಮಾತನಾಡುವುದಿಲ್ಲ, ಅವರ ಸಂಪೂರ್ಣ ವ್ಯಕ್ತಿತ್ವ ಮಾತನಾಡುತ್ತದೆ.  ಇಂತಹ ಶಿಕ್ಷಣವನ್ನು ಉತ್ತೇಜಿಸಲು ಮತ್ತು ಅದನ್ನು ದೈನಂದಿನ ಚಟುವಟಿಕೆಯನ್ನಾಗಿಸಲು ಕೆಲವು ಸಂಸ್ಥೆಗಳು ಪ್ರಯತ್ನಿಸುತ್ತಿವೆ.              ಶಿಕ್ಷಕರಿಗೆ ಸೃಜನಶೀಲತೆ, ಸೃಜನಶೀಲ ಬೋಧನೆ, ಕಲಿಕೆಯ ವಿಧಾನಗಳು, ವಿದ್ಯಾರ್ಥಿಗಳಲ್ಲಿ ಕಲಿಕೆಯ ಆಸಕ್ತಿ, ಒಲವು ಮೂಡಿಸುವ ಪ್ರಯತ್ನಗಳು ನಡೆಯುತ್ತಿವೆ.  ಇದಕ್ಕೆ ಒಂದು ಉತ್ತಮ ಉದಾಹರಣೆ ಎಂದರೆ ನಲಿ-ಕಲಿ ಪ್ರಯೋಗ. ಇಂತಹ ಕಲಿಕಾ ಮತ್ತು ಬೋಧನಾ ವಿಧಾನಗಳಿಂದ ವಿದ್ಯಾರ್ಥಿಗಳಲ್ಲಿ ಹೆಚ್ಚಿನ ಆಸಕ್ತಿ ಮತ್ತು ಉತ್ಸಾಹ ಮೂಡಿಸಲು ಸಾಧ್ಯವಾಗುತ್ತದೆ.  ನಾವು ದಿನವೂ ಕಾಣುವ ಸಾಮಾನ್ಯ ದೃಶ್ಯವೆಂದರೆ ಮಕ್ಕಳು ಶಾಲೆಗೆ ನಡೆದು ಹೋಗಿ ಮನೆಗೆ ಓಡುತ್ತಾ ಬರುತ್ತಾರೆ.  ಇದನ್ನು ಬದಲಿಸಿ ಮಕ್ಕಳು ಶಾಲೆಗೆ ಓಡುತ್ತಾ ಹೋಗಿ ಮನೆಗೆ ನಡೆದು ಬರುವ ವಾತಾವರಣ ಸೃಷ್ಟಿಸಬೇಕು.  ಆಗ ಮಾತ್ರ ಶಿಕ್ಷಣ ಸಾರ್ಥಕವಾಗುವುದು.  ಇದು ಕೇವಲ ಒಂದು ರಾತ್ರಿಯಲ್ಲಿ ಆಗುವ ಕೆಲಸವಲ್ಲ.  ಆದರೆ ಇದನ್ನು ಕಾರ್ಯಗತಗೊಳಿಸುವ ಕಡೆ ತಕ್ಷಣವೇ ಗಮನ ಹರಿಸಬೇಕು.  ಅದರ ಮೊದಲ ಹೆಜ್ಜೆ ಶಿಕ್ಷಕರ ಸಬಲೀಕರಣ. ಈ ನಿಟ್ಟಿನಲ್ಲಿ ಅವರಿಗೆ ನಿರಂತರ ತರಬೇತಿ ದೊರೆಯಬೇಕು. ಒಂದು ದೇಶದ ಗುಣಮಟ್ಟವನ್ನು ಅಲ್ಲಿನ ಶಿಕ್ಷಣ ಮತ್ತು ಶಿಕ್ಷಕರಿಂದ ಅಳೆಯುತ್ತಾರೆ. ಹೀಗಾಗಿ ಭಾರತವನ್ನು ಉತ್ತಮ ರಾಷ್ಟ್ರವನ್ನಾಗಿಸಲು ಶಿಕ್ಷಣ ವ್ಯವಸ್ಥೆ, ಶಿಕ್ಷಣದ ಗುಣಮಟ್ಟ, ಬೋಧನಾ ವಿಧಾನ, ಶಿಕ್ಷಕರು ಎಲ್ಲವನ್ನೂ, ಎಲ್ಲರನ್ನೂ ಸುಧಾರಿಸಬೇಕು.  ಆ ರೀತಿ ಆದಾಗ ಮಾತ್ರವೇ ಡಾ. ಅಬ್ದುಲ್ ಕಲಾಮ್ ರ ಕನಸು ಎಲ್ಲರ ಕನಸಾಗಿ ಮೂಡಿ, ಅದನ್ನು ನನಸು ಮಾಡಿದ ತೃಪ್ತಿ ಸಿಗುತ್ತದೆ.

06 December 2011

ಶಿಕ್ಷಣದ ಸಾಂಪ್ರದಾಯಿಕ ಮೌಲ್ಯಗಳು


ಸಾಕ್ರೆಟಿಸ್ ಕಾಲದ ಅಥೆನ್ಸ್, ರಿನೈಸಾನ್ಸ್ ಕಾಲದ ಫ್ಲೋರೆನ್ಸೆ, ಮತ್ತು ಗುಪ್ತರ ಕಾಲದ ನಳಂದ ನಗರಗಳು ಮಾಹಿತಿ, ಜ್ಞಾನ, ಸಂಪ್ರದಾಯ, ಶಿಕ್ಷಣ ಮತ್ತು ಕೌಶಲ್ಯ ಶ್ರೀಮಂತವಾಗಿದ್ದ ಸಮಾಜಗಳು.  ನಾವು ಆ ಕಾಲದ ವೈಭವ, ಹಿರಿಮೆಗಳಿಗೆ ತೃಪ್ತಿಪಟ್ಟರೆ ಸಾಕೆ? ನಮ್ಮ ಮುಂದಿನ ಜನಾಂಗದವರು ಸಂಪ್ರದಾಯ, ಸಂಸ್ಕೃತಿಗಳ ಆಧಾರದಮೇಲೆ ತಮ್ಮ ಶಿಕ್ಷಣವನ್ನು ರೂಪಿಸಿಕೊಳ್ಳುವಂತ ಶಿಕ್ಷಣ ವ್ಯವಸ್ಥೆಯನ್ನು ನಿರ್ಮಾಣ ಮಾಡಬೇಕು.  ಹಾಗಾದರೆ, ನಾವು ಮಕ್ಕಳಿಗೆ ಯಾವ ರೀತಿ ಶಿಕ್ಷಣ ನೀಡಬೇಕು ಮತ್ತು ಏನನ್ನು ಕಲಿಸಬೇಕುಮೊದಲನೆಯದಾಗಿ, ನಾವು ನಮ್ಮ ಸಮಾಜದ ಅತ್ಯಂತ ಮುಖ್ಯವಾದ ಒಂದು ವಿಷಯ ಅಥವ ಭಾಗವನ್ನು ಗುರುತಿಸಬೇಕು.  ನಂತರ ಸಮಾಜದಲ್ಲಿ ಸಾಂಸ್ಕೃತಿಕ ಮೌಲ್ಯಗಳನ್ನು ರೂಪಿಸಲು ಅದರ ಪಾತ್ರವೇನೆಂದು ನಿರ್ಧರಿಸಬೇಕು.  ಉದಾ: ಒಬ್ಬ ವ್ಯಕ್ತಿ ಹೇಗೆ ಪೋಷಕನಾಗಿ, ಸನ್ಯಾಸಿಯಾಗಿ, ಕವಿಯಾಗಿ ತನ್ನ ಜವಾಬ್ದಾರಿ ನಿರ್ವಹಿಸುತ್ತಾನೋ, ಹಾಗೆ ಸರ್ವರಿಗೂ ಅನುಕೂಲವಾಗುವಂತ ಒಂದು ಶಿಕ್ಷಣ ವ್ಯವಸ್ಥೆ ನಿರ್ಮಾಣವಾಗಬೇಕು.  ಈ ಹಾದಿಯಲ್ಲಿ ಯೋಚಿಸಿದಾಗ, ಒಬ್ಬ ಸದ್ಗುಣಶೀಲ ವ್ಯಕ್ತಿಯಾಗಿ, ಉತ್ತಮ ಜೀವನ ನಡೆಸಲು ಏನೆಲ್ಲಾ ಜ್ಞಾನವನ್ನು ಸಂಪಾದಿಸಬೇಕು ಎಂಬುದು ಅರಿವಾಗುತ್ತದೆ. ಆರಿಸ್ಟಾಟಲ್ ಮತ್ತು ನ್ಯೂಟೋನಿಯನ್ ಕಾಲದ ಭೌತಶಾಸ್ತ್ರಜ್ಞರು, ಭೌತಶಾಸ್ತ್ರವನ್ನು ಅರ್ಥಮಾಡಿಕೊಂಡು ಅನ್ವಯಿಸಿದ ರೀತಿ ಹೇಗೆ ಬೇರೆ ಬೇರೆಯೋ ಹಾಗೆ ಒಬ್ಬ ಯುವಕ ಮತ್ತು ಹಿರಿಯ ವಿದ್ವಾಂಸರ ಅಧ್ಯಯನ ಕೌಶಲ್ಯಗಳು ಬೇರೆ ಬೇರೆಯಾಗಿರುತ್ತದೆ.  ಹೀಗೆ, ಸಾಮಾಜಿಕ ಮತ್ತು ಸಾಂಸ್ಕೃತಿಕ ಅಧ್ಯಯನಗಳಿಂದ ಪಡೆದ ಜ್ಞಾನ ಮಾನವ ಮತ್ತು ಮಾನವ ಸಮಾಜದ ನಮ್ಮ ಕಲ್ಪನೆಯನ್ನು ಬದಲಿಸಿದೆ.  ಅಂತೆಯೇ, ತಿಳಿವಳಿಕೆ ಮತ್ತು ಜ್ಞಾನದ ಮಟ್ಟ ಕಾಲದ ಜೊತೆ ಬದಲಾಗುತ್ತಿರುವುದು ಹೆಚ್ಚಿನ ಮಟ್ಟದಲ್ಲಿ ಅಭಿವ್ಯಕ್ತವಾಗಿದೆ.  ಯಾವ ವ್ಯಕ್ತಿ ವಿಷಯ ಜ್ಞಾನವನ್ನು ಚನ್ನಾಗಿ ಅರ್ಥೈಸಿಕೊಳ್ಳುತ್ತಾನೋ, ಅವನು, ಅದನ್ನು ಸ್ವಲ್ಪದಷ್ಟಾದರೂ ಕಾರ್ಯರೂಪಕ್ಕೆ ತರುವಂತ ಸಾಮರ್ಥ್ಯ ಹೊಂದಿರುತ್ತಾನೆ.  ಆದ್ದರಿಂದ, ಒಂದು ಪೂರ್ವನಿಯೋಜಿತ ಸಮಾಜವು ಸಂವೇದನಾ ಜ್ಞಾನ, ಸಾಂಕೇತಿಕ ಜ್ಞಾನ ಮತ್ತು ಜಾನಪದ ವ್ಯಾಖ್ಯಾನಗಳ ಸಮ್ಮಿಲನವಾಗಿರುತ್ತದೆ.  ಇದಕ್ಕೆ ವಿರುದ್ಧವಾಗಿ ಆಧುನಿಕ ವಿದ್ವತ್ಪೂರ್ಣ ಸಮಾಜದಲ್ಲಿ ಅರಿವು ಮತ್ತು ತಿಳುವಳಿಕೆಗಳಿಗೆ ತೊಡಕುಗಳು ಉಂಟಾಗುತ್ತದೆ.  ಇದು ನಿರ್ದಿಷ್ಟವಾದ ಕಲ್ಪನೆ, ಪರಿಕಲ್ಪನೆಗಳನ್ನು ಮತ್ತು ಶತಮಾನಗಳಿಂದ ಒಳಗೆ ವಿಕಾಸಗೊಂಡ ಶಿಸ್ತು ಮತ್ತು ಸಮ್ಯಮದ ವಿಧಾನಗಳನ್ನು ಒಳಗೊಂಡಿರುತ್ತದೆ.  ಈ ವಿದ್ವತ್ಪೂರ್ಣ ಮತ್ತು ಶಿಸ್ತಿನ ರೂಪಗಳನ್ನು ತಿಳಿಯುವ ಮೊದಲು, ಭಾಗಶಃ ನಮೂನೆಗಳನ್ನು ಸಮನ್ವಯಗೊಳಿಸಬೇಕಾಗುತ್ತದೆ; ಇಲ್ಲದಿದ್ದರೆ, ಶಾಲೆಗಳ ಮತ್ತು ವಿಚಾರಗಳ ನಡುವೆ ಹಾನಿಕರ ಅಸಾಮರಸ್ಯ ಉಂಟಾಗುತ್ತದೆ.  ಇದೆಲ್ಲದರ ನಡುವೆ, ಯಾವುದೇ ಸಂಕೀರ್ಣ ಸಮಾಜವು  ಕುಶಲ ನಿರ್ವಹಣೆ, ಸಮೃದ್ಧ ಮಾಹಿತಿ, ಮತ್ತು ಆಳವಾದ ತಿಳುವಳಿಕೆಯ ಸಮ್ಮಿಲನವಾಗಿರಬೇಕು.  ನಮ್ಮ ಹಿಂದಿನ ಸಮಾಜಗಳು ಬಿಂಬಿತವಾದ ರೂಪವನ್ನು ಗಮನಿಸಿದರೆ, ಆ ಮೌಲ್ಯಾಧಾರಿತ ಸಮಾಜದ ಸಾಮರ್ಥ್ಯಗಳಲ್ಲಿ ಆದ ಅಗಾಧ ಬದಲಾವಣೆಗಳು ಸ್ಪಷ್ಟವಾಗಿ ಕಾಣುತ್ತದೆ.  ಒಂದು ಸರಿಯಾದ ಸಮತೋಲನ ಸಾಧಿಸುವುದು ಸವಾಲಿನ ಸಂಗತಿಯೇ; ಆದರೆ ಬಹುತೇಕ ಸಂಘಗಳು ಸಮಾಜದ ಮೌಲ್ಯ ಮತ್ತು ಬೇಡಿಕೆಗಳ ಮಿಶ್ರಣ ಸಾಧಿಸುವ ಬದಲು, ಒಂದರಿಂದ ಇನ್ನೊಂದರೆಡೆಗೆ ಕಾಲಕ್ರಮೇಣ ಪಲಾಯನ ಹೊಂದುತ್ತಿವೆ.  ಈ ರೀತಿಯ ಬೆಳವಣಿಗೆ ಸಮಾಜಕ್ಕೆ ಮತ್ತು ಶಿಕ್ಷಣಕ್ಕೆ ಮಾರಕವಾಗುತ್ತಿದೆ.  ಇನ್ನೊಂದೆಡೆಯಲ್ಲಿ ಚಿಂತಾಜನಕವಾಗಿರುವುದೇನೆಂದರೆ, ಯುವಕರಿಗೆ ಯಾವ ರೂಪದಲ್ಲಿ ವಿಷಯ ಜ್ಞಾನವನ್ನು ತಲುಪಿಸಬೇಕು ಮತ್ತು ಅದನ್ನು ಅವರಿಗೆ ಹೇಗೆ ತಿಳಿಯಪಡಿಸುವುದೆಂದು.  ಇಲ್ಲಿ ವಿವಿಧ ಸಮಾಜಗಳು ಎರಡು ಪರ್ಯಾಯ ಮಾರ್ಗಗಳಿಗೆ ಒತ್ತು ನೀಡಿವೆ.  ಮೊದಲನೆಯದು ಅನುಕರಣಶೀಲ ಶಿಕ್ಷಣ; ಇದರಲ್ಲಿ, ಶಿಕ್ಷಕ ತೋರಿಸಿಕೊಟ್ಟಿದ್ದನ್ನು, ವಿದ್ಯಾರ್ಥಿ ಬಲು ನಿಷ್ಠೆಯಿಂದ ಪಾಲಿಸಿ ಅನುಕರಣೆ ಮಾಡುತ್ತಾನೆ.  ನಿಖರ ಮಾಹಿತಿ ಅಥವಾ ಮಾದರಿಗಳ ಆಧಾರದ ಮೇಲೆ ಅನುಕರಣೀಯ ವಿಧಾನ ಒಂದಿರುತ್ತದೆ; ಅದರಿಂದೀಚೆಗೆ ಕೊಂಚ ಸರಿದರೂ ಅದನ್ನು ಆಪೆಕ್ಷಿಸಿ ತಿರಸ್ಕರಿಸುತ್ತಾರೆ.  ಇಂತಹ ಪದ್ಧತಿಗಳು ಬೆಲೆಕೊಡುವುದು ಕೇವಲ ಅನುಕರಣೆ ಮತ್ತು ಸಾಂಪ್ರದಾಯಿಕ ಪ್ರದರ್ಶನಾ ಮೌಲ್ಯಗಳಿಗೆ ಮಾತ್ರ.  ಇದಕ್ಕೆ ವಿರುದ್ಧ ದಿಕ್ಕಿನಲ್ಲಿ ಪರಿವರ್ತಕ ವಿಧಾನವನ್ನು ಕಾರ್ಯರೂಪಕ್ಕೆ ತರಲಾಗಿದೆ.  ಈ ವಿಧಾನದಲ್ಲಿ, ಬಯಸಿದ ವರ್ತನೆಯನ್ನು ರೂಪಿಸುವುದಕ್ಕಿಂತ, ಶಿಕ್ಷಕ ತನ್ನ ವಿದ್ಯಾರ್ಥಿಗಳಿಗೆ ಒಬ್ಬ ಮಾದರಿ, ಗುರು, ಸೌಕರ್ಯವ್ಯಕ್ತಿ, ಸ್ನೇಹಿತ, ತತ್ವಜ್ಞಾನಿಯಾಗಿ ಕಾರ್ಯನಿರ್ವಹಿಸುತ್ತಾನೆ.  ಕೆಲವು ಸಂದರ್ಭಗಳನ್ನು ಸೃಷ್ಟಿಸುವ ಮೂಲಕ ಶಿಕ್ಷಕರು ತಮ್ಮ ವಿದ್ಯಾರ್ಥಿಗಳಿಗೆ ಸಮಸ್ಯೆ ಮತ್ತು ಸವಾಲುಗಳನ್ನು ಎದುರಿಸುವ ಪರಿಯನ್ನು ತಿಳಿಸುತ್ತಾರೆ.  ಹಾಗೆಯೇ ವಿವಿಧ ರೀತಿಯ ಪರೀಕ್ಷೆಗಳನ್ನು ನೀಡಿ, ಅದನ್ನು ಧೈರ್ಯದಿಂದ ಎದುರಿಸುವ ಮನೋಬಲವನ್ನು ನೀಡುತ್ತಾರೆ.  ಇದರಿಂದ ವಿದ್ಯಾರ್ಥಿಗಳಿಗೆ ತಮ್ಮ ಶಕ್ತಿ, ಸಾಮರ್ಥ್ಯಗಳ ಬಗ್ಗೆ ಅರಿವು ಮೂಡಿಸುತ್ತಾರೆ ಮತ್ತು ತಮ್ಮದೇ ಆದ ಸೃಜನಶೀಲ ರೀತಿಯಲ್ಲಿ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವ ಅವಕಾಶ ನೀಡುತ್ತಾರೆ.  ನಾವು ಮೂಲ ಕೌಶಲ್ಯಗಳಿಗೆ ಒತ್ತು ನೀಡಿ ಕೆಲವು ಕಲೆಗಳಲ್ಲಿ ಪ್ರಭುತ್ವವನ್ನು ಸಾಧಿಸುವ ಅಗತ್ಯವಿದೆ.  ಒಂದು ಸೃಜನಶೀಲ ನಿಲುವಿನೆಡೆಗೆ ಯಾರು ಹೆಚ್ಚು ಒಲವು ತೋರಿಸುತ್ತಾರೋ ಅವರು ಶಿಕ್ಷಣವನ್ನು ಒಂದು ಅವಕಾಶವನ್ನಾಗಿ ಪರಿಗಣಿಸಿ ಜ್ಞಾನದ ಆವಿಷ್ಕಾರಕ್ಕೆ ತಮ್ಮ ಹಿಂದಿನ ಅನುಭವಗಳಲ್ಲಿ ಎದುರಾದ ಸಮಸ್ಯೆಗಳಿಗೆ ಹೊಸ ಉಪಾಯಗಳನ್ನು ಹುಡುಕುತ್ತಾ, ಕಲ್ಪನೆ, ಪರಿಕಲ್ಪನೆಗಳನ್ನು ತಮ್ಮ ಸಾಮರ್ಥ್ಯದ ಮಾನದಂಡವಾಗಿ ಉಪಯೋಗಿಸಿ ಸಾಮೂಹಿಕ ಜ್ಞಾನಕ್ಕೆ ಕಾರಣರಾಗುತ್ತಾರೆ.  ಇದೆಲ್ಲದರಿಂದ, ನಾವು ಶೈಕ್ಷಣಿಕ ಪರಿಸರಗಳ ಸೃಷ್ಟಿಕರ್ತರಾಗಿ ನಮ್ಮ ಯೋಚನೆಗಳನ್ನು ಕಾರ್ಯರೂಪಕ್ಕೆ ತರುವಂತವರಾಗಬೇಕು.  ಇದನ್ನು ರೂಪಾಂತರಗೊಳಿಸಲು ಹಲವು ನಿಲುವುಗಳು, ಆಯ್ಕೆಗಳು ನಿರ್ಧಾರಗಳ ಅಗತ್ಯವಿದೆ.  ಆದರೆ ಇದು ಹೆಚ್ಚು ಕ್ಲಿಷ್ಟವಾದದ್ದೆನಲ್ಲ ಏಕೆಂದರೆ, ಒಂದಿಲ್ಲೊಂದು ಶೈಕ್ಷಣಿಕ ವಿಧಾನಗಳು ಯಾವಾಗಲು ಸಿದ್ಧವಾಗಿರುತ್ತದೆ.  ನಿಟ್ಟಿನಲ್ಲಿ ನಮ್ಮ ಶೈಕ್ಷಣಿಕ ಪರಿಸರ ಬೆಳದಲ್ಲಿ ನಮ್ಮ ಸಮಾಜವು ಪ್ರಗತಿಯ ಹಾದಿಯಲ್ಲಿ ಮುಂದುವರೆಯುವುದು ಸುಲಭವಾಗುತ್ತದೆ.

25 September 2011

ಪ್ರೇಮಾನ್ವೇಷಣೆ

 
ಈ ಸಂಭಾಷಣೆ, ಮಿಂಚಂಚೆ ಅನ್ವೇಷಣೆ 
ತುಸು ಮೌನ, ಕ್ಷಣ ಗಾನ, 
ತೆರೆದಿಟ್ಟ ಮನದ ತಾಳೆಗರಿ 
ತೇಲಿ ಬಂದ ತೆಪ್ಪದಂತೆ 
ಸೇರಿತಲ್ಲ ಭಾವ ತೀರ 
ಹಾಡಿತೆಲ್ಲ ಹಂಸ ರಾಗ 
ಕುಹೂ ಕುಹೂ ಕೋಗಿಲೆ ||

ಮೊದಮೊದಲು ಮೌನ ಮಿಲನ 
ನಡುನಡುವೆ ಕಾಲ ಹರಣ
ಮುಸ್ಸಂಜೆ, ಮಳೆಬಿಲ್ಲೆ
ಕವಲೊಡೆದ ಪ್ರೇಮ ಕವನ 
ಬಿಗಿ ಹಿಡಿತ, ಎಡೆ ಬಡಿತ 
ತೆರೆದೊಡನೆ ಧುಮುಕೋ ತುಡಿತ||

ಮೊಳಗಿತು ಮೊದಲ ವದನ  
ಬೆರೆತಿತು ಭಾವ ತರಣ 
ಸಿಂಧೂರ ಸುಧೆಯ ಸಮ್ಮಿಲನ 
ಶುರುವಾಯಿತು ಪ್ರೇಮ ಪಯಣ 
ನುಡಿತಿತ್ತು ಮನದ ಕರಣ 
ಬೆಸೆಯಿತು ಬಾಳ ಆವರಣ||